ಶನಿವಾರ, ಮಾರ್ಚ್ 17, 2012

ಕವಿಮನೆತನದ ಅದ್ಭುತ ಪ್ರತಿಭೆ - ದಿ. ಎಸ್.ಕೆ.ಲಿಂಗಣ್ಣಯ್ಯ [1879-1943]


 

    ಒಬ್ಬ ವ್ಯಕ್ತಿ ಜೀವಿತಕಾಲದಲ್ಲಿ ಮಾಡಿರುವ ಸಾಧನೆ ಅವನ ಯಶೋಗಾಥೆ ಸಾರುತ್ತದೆ. ಅವನ ಕೃತಿಗಳು ಅವನನ್ನು ಅಮರನನ್ನಾಗಿಸುತ್ತವೆ. ಕವಿಮನೆತನದ 6ನೆಯ ಪೀಳಿಗೆಯ ಸಾಗರದ ಕವಿ ಲಿಂಗಣ್ಣಯ್ಯನವರದು ಅಂತಹ ಒಂದು ಅದ್ಭುತ ವ್ಯಕ್ತಿತ್ವ. ಒಬ್ಬ ಕವಿಯಾಗಿ, ಸಾಹಿತಿಯಾಗಿ, ಚಿತ್ರಕಲಾವಿದನಾಗಿ, ಸಂಗೀತದ ಸಾಧಕನಾಗಿ, ಆಡಳಿತಗಾರನಾಗಿ, ಜ್ಯೋತಿಷಿಯಾಗಿ, ವೈದ್ಯನಾಗಿ, ವಾಣಿಜ್ಯೋದ್ಯಮಿಯಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಹೃದಯಿಯಾಗಿದ್ದ ಅವರ ಜೀವನ ಚರಿತ್ರೆ ನಮ್ಮೆಲ್ಲರಿಗೆ ಮಾರ್ಗದರ್ಶಕ. ಅವರ ಜೀವನ ಚರಿತ್ರೆಯನ್ನು ಸೋದರ ಕವಿಸುರೇಶ ಆಂಗ್ಲ ಭಾಷೆಯಲ್ಲಿ ರಚಿಸಿದ 'Karmayogi - Kalavallabha S.K. LINGANNAIYA' ಎಂಬ ಪುಸ್ತಕ ಕವಿ ಪ್ರಕಾಶನದ ಕೊಡುಗೆ. ಓದಿಸಿಕೊಂಡು ಹೋಗುವ ಉತ್ತಮ ಬರಹದ ಶೈಲಿ, ಉಪಯುಕ್ತ ಮಾಹಿತಿಗಳು, ಚಿತ್ರಗಳು 114 ಪುಟಗಳ ಈ ಪುಸ್ತಕದ ಮೌಲ್ಯ ಹೆಚ್ಚಿಸಿವೆ. ಇದನ್ನು ಈ ತಾಣದಲ್ಲಿ ಪ್ರಕಟಿಸಿದ್ದು ಓದುಗರು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ದಾಖಲಿಸಬಹುದು. ಲಿಂಕ್ ಇಲ್ಲಿದೆ:  http://kavikirana.blogspot.in/2011/07/this-book-is-biography-of-one-of.html


    'ಕವಿಕಿರಣ' - ಇದು ಕವಿ ಪ್ರಕಾಶನದ ಪ್ರಕಟಣೆಗಳನ್ನು ಅಂತರ್ಜಾಲದ ಮೂಲಕವೂ ಜನರಿಗೆ ತಲುಪಿಸಲು ಉದ್ದೇಶಿಸಿರುವ ಬ್ಲಾಗ್.  ಈ ತಾಣದಲ್ಲಿ ಇದುವರೆಗೆ ಪ್ರಕಟಿಸಿದ ಪ್ರಕಟಣೆಗಳು:
1. 'ಕವಿಕಿರಣ' ಪತ್ರಿಕೆ ಮೂಡಿದ ಪರಿಯ ಪರಿಚಯ, 
     http://kavikirana.blogspot.in/2011/01/blog-post_26.html
2. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2008ರ ಸಂಚಿಕೆ
     http://kavikirana.blogspot.in/2011/02/2008.html
3. 'ಕವಿಕಿರಣ' ಪತ್ರಿಕೆಯ ಜೂನ್, 2009ರ ಸಂಚಿಕೆ
     http://kavikirana.blogspot.in/2011/04/2009.html
4. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2009ರ ಸಂಚಿಕೆ
     http://kavikirana.blogspot.in/2011/05/01-12-2009.html
5. 'ಕವಿಕಿರಣ' ಪತ್ರಿಕೆಯ ಜೂನ್, 2010ರ ಸಂಚಿಕೆ
    http://kavikirana.blogspot.in/2011/07/01-06-2010.html
6. 'ಕವಿಕಿರಣ' ಪತ್ರಿಕೆಯ ಜೂನ್, 2010ರ ವಿಶೇಷ ಸಂಚಿಕೆ
    http://kavikirana.blogspot.in/2011/07/01-06-2010.html
7.  ಕ.ವೆಂ. ನಾಗರಾಜರ ಕೃತಿ: ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿಚಿತ್ರಣ)  http://kavikirana.blogspot.in/2011/06/blog-post_23.html


      ಕಾಲಕ್ರಮೇಣ ಉಳಿದ ಪ್ರಕಟಣೆಗಳನ್ನೂ ಸಹೃದಯೀ ವಾಚಕರ ಮುಂದಿಡುವ ವಿಚಾರವಿದೆ. ಪ್ರತಿಗಳು ಬೇಕೆನಿಸಿದವರು ನನ್ನನ್ನಾಗಲೀ, ಕವಿ ಸುರೇಶರನ್ನಾಗಲೀ ಸಂಪರ್ಕಿಸಬಹುದು. ತಮ್ಮ ಪ್ರತಿಕ್ರಿಯೆ, ಸಲಹೆ, ಸೂಚನೆ, ಸಹಕಾರಗಳಿಗೆ ಸ್ವಾಗತ.
-ಕ.ವೆಂ.ನಾಗರಾಜ್.