ಬುಧವಾರ, ಜುಲೈ 3, 2013

ಅಪ್ಪ - ಮಗ - ಮೊಮ್ಮಗ




    ಅದೊಂದು ವಿಶಿಷ್ಟ ಸಂದರ್ಭ. ದಿನಾಂಕ 28-12-2008ರಂದು ಬೆಂಗಳೂರಿನಲ್ಲಿ ನಡೆದ ಕವಿ ಕುಟುಂಬಗಳ ಮತ್ತು ಬಂಧು-ಬಳಗದವರ ಸಮಾವೇಶದಲ್ಲಿ ದಿ. ಕವಿ ಸುಬ್ರಹ್ಮಣ್ಯಯ್ಯನವರ ವ್ಯಕ್ತಿತ್ವ ಪರಿಚಯಿಸುವ ಕೃತಿ 'ಕವಿ ಸುಬ್ರಹ್ಮಣ್ಯಯ್ಯ' ಅನ್ನು ಮೊಮ್ಮಗ ಕವಿನಾಗರಾಜ್ ರಚಿಸಿದ್ದು, ಅದನ್ನು ಬಿಡುಗಡೆ ಮಾಡಿದ್ದು ಕವಿ ಸುಬ್ರಹ್ಮಣ್ಯಯ್ಯನವರ ಮಗ ದಿ. ಕವಿ ವೆಂಕಟಸುಬ್ಬರಾಯರು.ದ್ವನಿವರ್ಧಕದ ಸಮಸ್ಯೆಯಿಂದ ಅವರ ಮಾತುಗಳು ಸ್ಪಷ್ಟವಾಗಿ ಕೇಳದಿದ್ದರೂ ಇದೊಂದು ಅಪರೂಪದ ವಿಡಿಯೋ ಆಗಿ ಉಳಿದಿರುವುದು ವಿಶೇಷ. ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ್ದ ಅವರು ತಮ್ಮ ತಂದೆಯ ಬಗ್ಗೆ ನೆನಪಿಸಿಕೊಂಡಿದ್ದಲ್ಲದೆ, ಮಕ್ಕಳು, ಮೊಮ್ಮಕ್ಕಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅವರ ಭಾಷಣದ ಒಂದು ತುಣುಕು ಇದು.

ಭಾನುವಾರ, ಜೂನ್ 30, 2013

ಪೂರ್ಣಿಮಾ ಗೋಪಾಲ್: ಇನ್ನು ನೆನಪು ಮಾತ್ರ


      ದಿ. ಕವಿ ಸುಬ್ರಹ್ಮಣ್ಯಯ್ಯನವರ  ಮೊಮ್ಮಗ ಹಾಗೂ ದಿ. ಹೆಚ್. ವಿ. ಕೃಷ್ಣಮೂರ್ತಿ ಮತ್ತು ಸೀತಮ್ಮನವರ ಕಿರಿಯ ಮಗ ಶ್ರೀ ಹೆಚ್. ಕೆ. ಗೋಪಾಲರ ಪತ್ನಿ ಶ್ರೀಮತಿ ಪೂರ್ಣಿಮಾರವರು ದಿನಾಂಕ ೨೧-೦೬-೨೦೧೩ರಂದು ವಿಧಿವಶರಾದುದು ಎಲ್ಲಾ ಬಂಧುಗಳಿಗೆ ದುಃಖದಾಯಕ ಸಂಗತಿ. ಸಾಗರ ತಾಲ್ಲೂಕಿನ ಒಂದು ಕುಗ್ರಾಮ ಕೆಳುವೆಯಲ್ಲಿನ ಈಶ್ವರ ದೇವಾಲಯದ ಅರ್ಚಕರಾಗಿ ಬಡತನದ ಜೀವನ ನಡೆಸುತ್ತಿದ್ದ ಗೋಪಾಲರಿಗೆ ಬೆನ್ನೆಲುಬಾಗಿ, ಎಲ್ಲಾ ರೀತಿಯಲ್ಲಿ ಉತ್ತಮ ಸಹಕಾರಿಯಾಗಿದ್ದ ಪೂರ್ಣಿಮಾರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಸಂಬಂಧಿಸಿದ ಎಲ್ಲರಿಗೆ ನೀಡಲಿ, ಅಗಲಿದ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಕವಿಕಿರಣ ಬಳಗ ಪ್ರಾರ್ಥಿಸುತ್ತದೆ.
     ಮೂರು ವರ್ಷಗಳ ಹಿಂದೆ ನಾವು ಕೆಲವು ಬಂಧುಗಳು ಕೆಳುವೆಗೆ ಗೋಪಾಲರ ಮನೆಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಅವರ ಆತಿಥ್ಯ ಸ್ವೀಕರಿಸಿ ಸಂತಸಪಟ್ಟಿದ್ದ ಸಂದರ್ಭದಲ್ಲಿ ತೆಗೆದಿದ್ದ ಕೆಲವು ಫೋಟೋಗಳು ಇವು: